ಸುದ್ದಿಗಾರರೊಂದಿಗೆ ಮಾತನಾಡಿದ ಡಿಐಜಿ (ರೇಂಜ್ 1) ಎನ್ ಹೆರೋಜಿತ್ ಸಿಂಗ್ ಅವರು ‘ಇತ್ತೀಚೆಗೆ ಪ್ರತಿಭಟನೆಗಳ ಸ್ವರೂಪವು ಬದಲಾಗಿದೆ. ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸುವುದು, ಅವರನ್ನು ಗುರಿಯಾಗಿಸಿ ಸ್ಲಿಂಗ್ಶಾಟ್ಗಳಿಂದ ಕಬ್ಬಿಣದ ತುಂಡುಗಳನ್ನು ಹಾರಿಸುವುದು, ಆಶ್ರವಾಯು ಶೆಲ್ಗಳನ್ನು ಸಿಡಿಸುವುದು ಹಾಗೂ ಸ್ವಯಂಚಾಲಿತ ಬಂದೂಕುಗಳನ್ನು ಬಳಸುವುದನ್ನು ಕಂಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.