ಕೆಲವರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದು ಈಗ ಅವರು ನಾಪತ್ತೆಯಾಗಿರುವ 32 ಪ್ರಕರಣಗಳು ಸಹ ಕಂಡುಬಂದಿವೆ ಎಂದೂ ಅದು ಹೇಳಿದೆ. 627 ಮಂದಿಯನ್ನು ಬಂಧಿಸಲಾಗಿದೆ.
ಇದಲ್ಲದೆ, ಬಹುತೇಕ ಯುವ ಪ್ರತಿಭಟನಾಕಾರರ ನೇತೃತ್ವದಲ್ಲಿ ನಡೆಯುತ್ತಿದ್ದ ಶಾಂತಿಯುತ ತೆರಿಗೆ ವಿರೋಧಿ ರ್ಯಾಲಿಗಳು ಕಳೆದ ಮಂಗಳವಾರ ವಿವಾದಾತ್ಮಕ ಕಾಯ್ದೆ ಅಂಗೀಕರಿಸಿದ ಬೆನ್ನಲ್ಲೇ ಹಿಂಸಾರೂಪಕ್ಕೆ ತಿರುಗಿತ್ತು.
ಕೇಂದ್ರ ನೈರೋಬಿಯ ಸಂಸತ್ ಭವನದ ಆವರಣಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಂಸತ್ತಿನ ಒಂದು ಭಾಗಕ್ಕೆ ಬೆಂಕಿ ಹಚ್ಚಿದ್ದರು. ಈ ಸಂದರ್ಭ ಗುಂಪು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು.