ಕನಿಷ್ಠ ಐದು ಕ್ಯಾಲೆಂಡರ್ ವರ್ಷಗಳವರೆಗೆ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಎಲ್ಲ ಭಾರತ ಆಟಗಾರರನ್ನು ‘ಅನ್ಕ್ಯಾಪ್ಡ್ ಆಟಗಾರರು’ ಎಂದು ಪರಿಗಣಿಸಲು ಬಿಸಿಸಿಐ ನಿರ್ಧರಿಸಿದೆ. ತಂಡವು ಉಳಿಸಿಕೊಳ್ಳುವ ಆಟಗಾರರಲ್ಲಿ ಒಬ್ಬ ಅನ್ಕ್ಯಾಪ್ಡ್ ಆಟಗಾರ ಇರಬೇಕೆಂದು ನಿಯಮ ರೂಪಿಸಿದೆ. ಹೀಗಾಗಿ, ಮಹೇಂದ್ರ ಸಿಂಗ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅನ್ಕ್ಯಾಪ್ಡ್ ಆಟಗಾರರ ನಿಯಮದಡಿ ಉಳಿಸಿಕೊಳ್ಳಲು ಅವಕಾಶವಿದೆ.