ಆಗಿದ್ದೇನು?
19.2ನೇ ಓವರ್ನಲ್ಲಿ ಬಾಂಗ್ಲಾ ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ ಎಸೆತದಲ್ಲಿ ವಿರಾಟ್ ಕೊಹ್ಲಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸುತ್ತಾರೆ.
ಈ ವೇಳೆ ಎಲ್ಬಿಡಬ್ಲ್ಯುಗಾಗಿ ಬೌಲರ್ ಬಲವಾದ ಮನವಿ ಮಾಡುತ್ತಾರೆ. ಎದುರಾಳಿ ತಂಡದ ಮನವಿ ಪುರಸ್ಕರಿಸಿದ ಅಂಪೈರ್ ಔಟ್ ತೀರ್ಪು ನೀಡಿದರು.
ಈ ವೇಳೆ ಗೊಂದಲಕ್ಕೀಡಾದ ಕೊಹ್ಲಿ, ನಾನ್ ಸ್ಟ್ರೈಕರ್ನಲ್ಲಿ ಶುಭಮನ್ ಗಿಲ್ ಅವರ ಸಲಹೆಯನ್ನು ಪಡೆಯುತ್ತಾರೆ. ಬಳಿಕ ಡಿಆರ್ಎಸ್ ಮನವಿ ಪಡೆಯದಿರಲು ನಿರ್ಧರಿಸುತ್ತಾರೆ.
ವಿರಾಟ್ ಕೊಹ್ಲಿ ತಲೆ ತಗ್ಗಿಸುತ್ತಾ ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಾರೆ. ಬಳಿಕ ರಿಪ್ಲೇಯಲ್ಲಿ ವಿರಾಟ್ ಅವರ ಬ್ಯಾಟ್ಗೆ ಚೆಂಡು ತಗುಲಿರುವ ದೃಶ್ಯ ಕಂಡುಬರುತ್ತದೆ.
ಈ ವೇಳೆ ಪೆವಿಲಿಯನ್ನಲ್ಲಿದ್ದ ನಾಯಕ ರೋಹಿತ್ ಶರ್ಮಾ ಸಹ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.