ಕುಮಾರವ್ಯಾಸರು ಧಾರವಾಡ ಜಿಲ್ಲೆಯ ಕೋಳಿವಾಡದಲ್ಲಿ ಜನಿಸಿದರು. ನಾರಾಯಣಪ್ಪನವರು ಕುಮಾರವ್ಯಾಸ ಎಂಬ ಹೆಸರಿನಿಂದ ಪರಿಚಿತರಾದವರು. ಕುಮಾರವ್ಯಾಸನ ಅತ್ಯಂತ ಪ್ರಸಿದ್ಧ ಕೃತಿ, ‘ಕರ್ಣಾಟ ಭಾರತ ಕಥಾಮಂಜರಿ’ ಗದುಗಿನ ಭಾರತ ಮತ್ತು ಕುಮಾರವ್ಯಾಸ ಭಾರತವೆಂದೇ ಪ್ರಸಿದ್ಧವಾಗಿದೆ. ಇದು ಮಹಾಭಾರತದ ಮೊದಲ ಹತ್ತು ಪರ್ವಗಳ (ಅಧ್ಯಾಯಗಳು) ರೂಪಾಂತರವಾಗಿದೆ. ಗದುಗಿನ ಭಾರತವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಲಾಗಿದ್ದು, ಇದು ಆರು ಸಾಲಿನ ಚರಣಗಳ ರೂಪಕವಾಗಿದೆ ಎಂದು ತಿಳಿಸಿದರು.