<p><strong>ಕಲಬುರಗಿ:</strong> ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ ಅವರ ಸ್ವಗ್ರಾಮ ಚಿಂಚೋಳಿ ತಾಲ್ಲೂಕಿನ ಹೂಡದಳ್ಳಿಯಿಂದ ಕನಕಪುರ ಗ್ರಾಮಕ್ಕೆ ಬೆಳಿಗ್ಗೆ 9ಕ್ಕೆ ಮತ್ತೊಂದು ಬಸ್ ಸಂಚಾರ ಶುರುವಾಗಿದೆ.</p><p>ವಿದ್ಯಾರ್ಥಿಗಳು ನಿತ್ಯ ಗ್ರಾಮದಿಂದ ಕನಕಪುರದ ಪ್ರೌಢಶಾಲೆ ತಲುಪಲು 7 ಕಿ.ಮೀ. ಕ್ರಮಿಸಬೇಕಿತ್ತು. </p><p>ಈ ಕುರಿತು 'ಪ್ರಜಾವಾಣಿ'ಯ ಭಾನುವಾರದ ಸಂಚಿಕೆಯಲ್ಲಿ 'ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ. ನಡಿಗೆ ಶಿಕ್ಷೆ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.</p><p>ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ತಕ್ಷಣ ಬಸ್ ಸಂಚಾರ ಶುರು ಮಾಡುವಂತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. </p><p>ಬೆಳಿಗ್ಗೆ 9ಕ್ಕೆ ಮಾಜಿ ಮುಖ್ಯಮಂತ್ರಿಗಳ ಸ್ವಗ್ರಾಮ ಹೂಡದಳ್ಳಿಯಿಂದ ಕನಕಪುರ ಮಾರ್ಗವಾಗಿ ಕಲಬುರಗಿಗೆ ಸಂಚರಿಸುವ ಬಸ್ನಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಖುಷಿಯಿಂದ ಸಂಚರಿಸಿದರು.</p><p>ಬೆಳಿಗ್ಗೆ 8ಕ್ಕೆ ಹೂಡದಳ್ಳಿಯಿಂದ ಒಂದು ಬಸ್ ಸಂಚರಿಸುತ್ತಿದೆ. ಆದರೆ, ಅಷ್ಟರಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಿದ್ಧವಾಗಿರುವುದಿಲ್ಲ. ಹಾಗಾಗಿ ಬೆಳಿಗ್ಗೆ 9ಕ್ಕೆ ಮತ್ತೊಂದು ಬಸ್ ಶುರು ಮಾಡುವಂತೆ ಬೇಡಿಕೆ ಇಟ್ಟಿದ್ದರು. </p><p>'ವಿದ್ಯಾರ್ಥಿಗಳ ಬೇಡಿಕೆಯಂತೆ ಬಸ್ ಹೂಡದಳ್ಳಿಯಿಂದ ಸಂಚಾರ ಶುರು ಮಾಡಿದೆ. ನಮ್ಮ ಘಟಕ ವ್ಯವಸ್ಥಾಪಕರು ಅದೇ ಬಸ್ನಲ್ಲಿ ಪ್ರಯಾಣಿಸಿದರು' ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಅವರು 'ಪ್ರಜಾವಾಣಿ'ಗೆ ತಿಳಿಸಿದರು.</p>.ಚಿಂಚೋಳಿ: ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ ‘ನಡಿಗೆ ಶಿಕ್ಷೆ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ ಅವರ ಸ್ವಗ್ರಾಮ ಚಿಂಚೋಳಿ ತಾಲ್ಲೂಕಿನ ಹೂಡದಳ್ಳಿಯಿಂದ ಕನಕಪುರ ಗ್ರಾಮಕ್ಕೆ ಬೆಳಿಗ್ಗೆ 9ಕ್ಕೆ ಮತ್ತೊಂದು ಬಸ್ ಸಂಚಾರ ಶುರುವಾಗಿದೆ.</p><p>ವಿದ್ಯಾರ್ಥಿಗಳು ನಿತ್ಯ ಗ್ರಾಮದಿಂದ ಕನಕಪುರದ ಪ್ರೌಢಶಾಲೆ ತಲುಪಲು 7 ಕಿ.ಮೀ. ಕ್ರಮಿಸಬೇಕಿತ್ತು. </p><p>ಈ ಕುರಿತು 'ಪ್ರಜಾವಾಣಿ'ಯ ಭಾನುವಾರದ ಸಂಚಿಕೆಯಲ್ಲಿ 'ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ. ನಡಿಗೆ ಶಿಕ್ಷೆ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.</p><p>ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ತಕ್ಷಣ ಬಸ್ ಸಂಚಾರ ಶುರು ಮಾಡುವಂತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. </p><p>ಬೆಳಿಗ್ಗೆ 9ಕ್ಕೆ ಮಾಜಿ ಮುಖ್ಯಮಂತ್ರಿಗಳ ಸ್ವಗ್ರಾಮ ಹೂಡದಳ್ಳಿಯಿಂದ ಕನಕಪುರ ಮಾರ್ಗವಾಗಿ ಕಲಬುರಗಿಗೆ ಸಂಚರಿಸುವ ಬಸ್ನಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಖುಷಿಯಿಂದ ಸಂಚರಿಸಿದರು.</p><p>ಬೆಳಿಗ್ಗೆ 8ಕ್ಕೆ ಹೂಡದಳ್ಳಿಯಿಂದ ಒಂದು ಬಸ್ ಸಂಚರಿಸುತ್ತಿದೆ. ಆದರೆ, ಅಷ್ಟರಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಿದ್ಧವಾಗಿರುವುದಿಲ್ಲ. ಹಾಗಾಗಿ ಬೆಳಿಗ್ಗೆ 9ಕ್ಕೆ ಮತ್ತೊಂದು ಬಸ್ ಶುರು ಮಾಡುವಂತೆ ಬೇಡಿಕೆ ಇಟ್ಟಿದ್ದರು. </p><p>'ವಿದ್ಯಾರ್ಥಿಗಳ ಬೇಡಿಕೆಯಂತೆ ಬಸ್ ಹೂಡದಳ್ಳಿಯಿಂದ ಸಂಚಾರ ಶುರು ಮಾಡಿದೆ. ನಮ್ಮ ಘಟಕ ವ್ಯವಸ್ಥಾಪಕರು ಅದೇ ಬಸ್ನಲ್ಲಿ ಪ್ರಯಾಣಿಸಿದರು' ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಅವರು 'ಪ್ರಜಾವಾಣಿ'ಗೆ ತಿಳಿಸಿದರು.</p>.ಚಿಂಚೋಳಿ: ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ ‘ನಡಿಗೆ ಶಿಕ್ಷೆ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>