ಕಳೆದ ಕೆಲ ದಿನಗಳಿಂದ ಐನಾಪುರ ಸಮೀಪ ಬರುವ ಬೀದರ್ ಜಿಲ್ಲೆಯ ಕೂಡಂಬಲ್ ಗ್ರಾಮದಲ್ಲಿ ಭೂಮಿಯಿಂದ ಸದ್ದು ಕೇಳಿ ಬರುತ್ತಿದೆ. ಈಗ ಐನಾಪುರ ಸುತ್ತಲಿನ ಗ್ರಾಮದಲ್ಲೂ ಲಘು ಕಂಪನ ಸಂಭವಿಸಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಶರಣ ಶಿರಸಗಿಯ ಭೂಕಂಪನ ಮಾಪಕ ಕೇಂದ್ರದಲ್ಲಿ ಯಾವುದೇ ದತ್ತಾಂಶ ದಾಖಲಾಗಿಲ್ಲ. ಅದರೆ ಹೈದರಾಬಾದ್ ರಾಷ್ಟ್ರೀಯ ಭೂ ಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ ಅವರ ಬಳಿ ದತ್ತಾಂಶ ಸಿಗಬಹುದು ಎಂದು ಮೂಲಗಳು ತಿಳಿಸಿವೆ.