ಸಾಕಾನೆ ಶಿಬಿರದ ಬಳಿಗೆ ಬರುತ್ತಿದ್ದ ಕಾಡಾನೆಗಳ ಹಿಂಡನ್ನು ತಿಮ್ಮ ಮರಳಿ ಕಾಡಿಗಟ್ಟಲು ಹೋಗುತ್ತಿದ್ದರು ಎನ್ನಲಾಗಿದೆ. ಹೆದ್ದಾರಿ ಬದಿಯಲ್ಲಿ ತೆರಳುತ್ತಿದ್ದ ತಿಮ್ಮನಿಗೆ ಗೋಣಿಕೊಪ್ಪಲು ಕಡೆಯಿಂದ ಬಂದ ಕೆ.ಆರ್.ನಗರದ ಕ್ಯಾಂಟರ್ ಡಿಕ್ಕಿ ಹೊಡೆದು ಕಾಲಿಗೆ ತೀವ್ರ ಗಾಯವಾಗಿತ್ತು. ಚಿಕಿತ್ಸೆಗಾಗಿ ವಿರಾಜಪೇಟೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ತಿಮ್ಮ ಕೊನೆ ಉಸಿರೆಳೆದಿದ್ದಾರೆ.