ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದ ಬಳಿಕ ಗಂಗಾವಳಿ ನದಿಯಲ್ಲಿ ಸೃಷ್ಟಿಯಾದ ಪ್ರವಾಹದಿಂದ ಕಣ್ಮರೆಯಾಗಿದ್ದ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಅವರ ಮೃತದೇಹ ಇದು ಎಂದು ಪೊಲೀಸರು ಶಂಕಿಸಿದ್ದಾರೆ.
'ಮಹಿಳೆ ಧರಿಸಿದ್ದ ಬಳೆ ಗುರುತು ಆಧರಿಸಿ ಸಣ್ಣಿ ಅವರದ್ದೇ ಮೃತದೇಹ ಇದು ಎಂದು ಗುರುತಿಸಲಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಎಂಟಕ್ಕೆ ಏರಿಕೆಯಾದಂತಾಗಿದ್ದು, ಮಹಿಳೆಯ ಮೃತದೇಹದ ಕುರಿತು ಜಿಲ್ಲಾಡಳಿತ ಇನ್ನಷ್ಟೆ ಮಾಹಿತಿ ಖಚಿತಪಡಿಸಬೇಕಿದೆ.