ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿ ನೀರಿನ ವಿಷಯವಾಗಿ ದೇವೇಗೌಡರ ಹೇಳಿಕೆ ಸರಿಯಿಲ್ಲ. ಕೃಷ್ಣಾ ನದಿಯಿಂದ ಒಂದು ಹನಿ ನೀರು ತೆಗೆದುಕೊಂಡು ಹೋಗಲು ನಾವೂ ಬಿಡುವುದಿಲ್ಲ ಎಂದು ಹೇಳಿದರು.
ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ 2010ರಲ್ಲಿ ಪ್ರಕಟವಾಗಿರುವ ಬ್ರಿಜೇಶ್ ಕುಮಾರ್ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕದ ಪಾಲಿನ 173 ಟಿಎಂಸಿ ನೀರಲ್ಲಿ ಯಾವಾವ ಯೋಜನೆಗೆ ಎಷ್ಟೆಷ್ಟು ಟಿಎಂಸಿ ನೀರು ಎಂಬುದು ಖಚಿತವಾಗಿ ತಿಳಿಸಲಾಗಿದೆ. ಇದರಲ್ಲಿ ಒಂದು ಟಿಎಂಸಿ ನೀರನ್ನು ಬೇರೆ ಉದ್ದೇಶಕ್ಕೆ ಬಳಸಲು ತೀರ್ಪಿನಲ್ಲೇ ಅವಕಾಶವಿಲ್ಲ ಎಂದರು.