ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಹಾವು ಕಚ್ಚಿ 6 ತಿಂಗಳಲ್ಲಿ 27 ಜನ ಸಾವು

ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ವಿಷ ಜಂತು: ಸುರಪುರ ತಾಲ್ಲೂಕಿನಲ್ಲಿ ಹೆಚ್ಚು ಸಾವು
Published : 4 ಜುಲೈ 2024, 6:10 IST
Last Updated : 4 ಜುಲೈ 2024, 6:10 IST
ಫಾಲೋ ಮಾಡಿ
Comments
ಗರಿಷ್ಠ 5 ಕನಿಷ್ಠ 2–3 ಆಂಟಿ-ಸ್ನೇಕ್ ವೆನಮ್ ಚುಚ್ಚುಮದ್ದನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲು ಸೂಚಿಸಲಾಗಿದೆ. ಮೂಢ ನಂಬಿಕೆ ತೊರೆದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ
ಡಾ.ಪ್ರಭುಲಿಂಗ ಮಾನಕರ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಮೂಢ ನಂಬಿಕೆ ಮೊರೆ!
ಜಿಲ್ಲೆಯಲ್ಲಿ ಇಂದಿಗೂ ಹಾವು ಕಚ್ಚಿದರೆ ಮೂಢ ನಂಬಿಕೆಯನ್ನು ಅನುಸರಿಸಿ ಸಾವಿಗೀಡಾದವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಹಾವು ಕಚ್ಚಿದಾಗ ಮಾಟ ಮಂತ್ರದ ಮೊರೆ ಹೋಗಿ ಜೀವ ತೆತ್ತ ಪ್ರಕರಣಗಳು ನಡೆದಿವೆ. ಮಂತ್ರಿಸಿದ ನೀರು ಕುಡಿಸುವುದು ಫೋನ್‌ನಲ್ಲಿ ಮಂತ್ರಿಸುವುದು ಇತ್ಯಾದಿಯಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ‘ಹಿಂದಿನ ಕಾಲದಲ್ಲಿ ವಿಷವಿಲ್ಲದ ಹಾವುಗಳು ಕಚ್ಚಿದಾಗ ದೇವರ ಮೊರೆ ಹೋಗಿ ಮಂತ್ರಿಸಿದ ನೀರು ಕುಡಿದು ಜೀವ ಉಳಿಸಿಕೊಳ್ಳುತ್ತಿದ್ದರು. ಆದರೆ ವಿಷಕಾರಿ ಹಾವು ಕಚ್ಚಿದಾಗ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಇಂದಿಗೂ ಮೌಢ್ಯದಿಂದ ಮಂತ್ರದ ಮೊರೆ ಹೋಗಿ ಜೀವನ ಕಳೆದುಕೊಳ್ಳುವುದು ನಡೆದಿದೆ. ಹೀಗಾಗಿ ಹಾವು ಕಚ್ಚಿದ ಅರ್ಧ ಗಂಟೆಯಲ್ಲಿ ಸಮೀಪದ ಆಸ್ಪತ್ರೆಗೆ ತೆರಳುವುದು ಉತ್ತಮ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭುಲಿಂಗ ಮಾನಕರ್‌ ಹೇಳುತ್ತಾರೆ. ‘ವಿಷ ಸರ್ಪ ಕಚ್ಚಿದಾಗ ಗೋಲ್ಡನ್‌ ಅವರ್‌ (ಜೀವ ರಕ್ಷಕ ಸಮಯ) ಅರ್ಧ ಗಂಟೆ ಹೆಚ್ಚಂದರೆ 1 ಗಂಟೆಯೊಳಗೆ ಚುಚ್ಚು ಮದ್ದು ತೆಗೆದುಕೊಳ್ಳಬೇಕು. ಆಗ ಜೀವ ರಕ್ಷಣೆ ಮಾಡಿಕೊಳ್ಳಲು ಸಾಧ್ಯ. ನಿರ್ಲಕ್ಷ್ಯ ಸಲ್ಲ. ಕೆಲವೊಮ್ಮೆ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದ್ದಾರೆ’ ಎನ್ನುತ್ತಾರೆ ಅವರು.
ಹಾವು ಕಚ್ಚಿ ಮೃತಪಟ್ಟವರು ಪ್ರದೇಶ;ಮೃತಪಟ್ಟವರು ಯಾದಗಿರಿ ನಗರ;6 ಯಾದಗಿರಿ ತಾಲ್ಲೂಕು;7 ಸುರಪುರ ತಾಲ್ಲೂಕು;13 ಹುಣಸಗಿ ತಾಲ್ಲೂಕು;1 ಒಟ್ಟು;27

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT