ನಂತರ ಕಾಮಿ ರೀಟಾ ಅವರು, ‘ಮೌಂಟ್ ಎವರೆಸ್ಟ್ನಲ್ಲಿ ಕಸದ ರಾಶಿ ಬೆಳೆಯುತ್ತಿದೆ. ಶಿಖರದಿಂದ ಮಂಜು ಕರಗುತ್ತಿದ್ದಂತೆ ಕಸವೂ ಹೆಚ್ಚಾಗುತ್ತಿದ್ದು, ಇದರಿಂದ ನಾನು ತೀವ್ರ ಚಿಂತಿತನಾಗಿದ್ದೇನೆ. ಈ ಬಗ್ಗೆ ಶೀಘ್ರವೇ ಗಮನ ಹರಿಸಬೇಕಾಗಿದೆ. ಶಿಬಿರಗಳಲ್ಲಿ ಕಸವನ್ನು ಸ್ವಚ್ಛಗೊಳಿಸಲು ಸರ್ಕಾರವು ಧನಸಹಾಯ ಅಭಿಯಾನಗಳ ಮೂಲಕ ಎವರೆಸ್ಟ್ ದಿನವನ್ನು ಆಚರಿಸಬೇಕು’ ಎಂದು ಸಲಹೆ ನೀಡಿದ್ದಾರೆ.