<p><strong>ಭುವನೇಶ್ವರ</strong>: ಒಡಿಶಾದಲ್ಲಿ ಸುಮಾರು 35.95 ಲಕ್ಷ ಜನರು ಡಾನಾ ಚಂಡಮಾರುತದ ಪರಿಣಾಮ ಎದುರಿಸಿದ್ದಾರೆ. ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಸಚಿವ ಸುರೇಶ್ ಪೂಜಾರಿ ಭಾನುವಾರ ತಿಳಿಸಿದ್ದಾರೆ.</p><p>ಮುನ್ನೆಚ್ಚರಿಕೆಯಾಗಿ 8.10 ಲಕ್ಷ ಜನರನ್ನು 6,210 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿತ್ತು. ಕೇಂದ್ರಪರ, ಬಾಲೇಶ್ವರ ಮತ್ತು ಭದ್ರಕ್ನಲ್ಲಿ ಭಾರಿ ಹಾನಿಯಾಗಿದ್ದರೂ, ಯಾವುದೇ ವ್ಯಕ್ತಿಯೂ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ.</p><p>ಪ್ರವಾಹ ಸ್ಥಿತಿ ಸುಧಾರಿಸಿರುವ ಸ್ಥಳಗಳಿಗೆ ಮರಳಲು ಹಲವರಿಗೆ ಅವಕಾಶ ನೀಡಲಾಗಿದೆ. ಇನ್ನೂ 1,178 ಪರಿಹಾರ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆದಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ ಎಂದಿದ್ದಾರೆ.</p><p>ಡಾನಾ ಚಂಡಮಾರುತವು ಶುಕ್ರವಾರ ಬೆಳಿಗ್ಗೆ ಹೊತ್ತಿಗೆ 14 ಜಿಲ್ಲೆಗಳಲ್ಲಿ 108 ಕೇಂದ್ರಗಳ 1,671 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪ್ಪಳಿಸಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, 5,840 ಮನೆಗಳಿಗೆ ಸಂಪೂರ್ಣ ಅಥವಾ ಭಾಗಶಃ ಹಾನಿಯಾಗಿದೆ ಎಂದು ಸಚಿವ ಹೇಳಿದ್ದಾರೆ.</p><p>'ಈವರೆಗೆ ನೈಸರ್ಗಿಕ ವಿಪತ್ತು ಸಂಭವಿಸಿದಾಗ ಜನರು ಮನೆಗಳನ್ನು ಕಳೆದುಕೊಳ್ಳುತ್ತಿದ್ದರು. ನಂತರ ಪರಿಹಾರ ಪಡೆಯುತ್ತಿದ್ದರು. ಆದರೆ, ಈ ಬಾರಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಯಸುತ್ತಿದ್ದೇವೆ. ಅದಕ್ಕಾಗಿ ಇಟ್ಟಿಗೆ, ಸಿಮೆಂಟ್, ಕಬ್ಬಿಣ ಬಳಸಿ ನಿರ್ಮಿಸಿದ ಸುಸಜ್ಜಿತ ಮನೆಗಳನ್ನು ಹಂತ ಹಂತವಾಗಿ ವಿತರಿಸಲು ಬಯಸಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ.</p><p>ಚಂಡಮಾರುತ ಹಾಗೂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಇರುವ ಕಚ್ಚಾ ಮನೆಗಳ ಸರ್ವೆ ನಡೆಸಲು ಒಡಿಶಾ ಸರ್ಕಾರ ಯೋಜಿಸಿದೆ.</p>.DANA ಚಂಡಮಾರುತ ಅಪ್ಪಳಿಸಲು ಕ್ಷಣಗಣನೆ: ಯಾರು ಇಟ್ಟರೀ ಹೆಸರು? ಏನಿದರ ಅರ್ಥ?.Dana Cyclone | ತಗ್ಗಿದ ‘ಡಾನಾ’ ಪ್ರಭಾವ: ಚುರುಕು ಪಡೆದ ಪರಿಹಾರ ಕಾರ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ</strong>: ಒಡಿಶಾದಲ್ಲಿ ಸುಮಾರು 35.95 ಲಕ್ಷ ಜನರು ಡಾನಾ ಚಂಡಮಾರುತದ ಪರಿಣಾಮ ಎದುರಿಸಿದ್ದಾರೆ. ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಸಚಿವ ಸುರೇಶ್ ಪೂಜಾರಿ ಭಾನುವಾರ ತಿಳಿಸಿದ್ದಾರೆ.</p><p>ಮುನ್ನೆಚ್ಚರಿಕೆಯಾಗಿ 8.10 ಲಕ್ಷ ಜನರನ್ನು 6,210 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿತ್ತು. ಕೇಂದ್ರಪರ, ಬಾಲೇಶ್ವರ ಮತ್ತು ಭದ್ರಕ್ನಲ್ಲಿ ಭಾರಿ ಹಾನಿಯಾಗಿದ್ದರೂ, ಯಾವುದೇ ವ್ಯಕ್ತಿಯೂ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ.</p><p>ಪ್ರವಾಹ ಸ್ಥಿತಿ ಸುಧಾರಿಸಿರುವ ಸ್ಥಳಗಳಿಗೆ ಮರಳಲು ಹಲವರಿಗೆ ಅವಕಾಶ ನೀಡಲಾಗಿದೆ. ಇನ್ನೂ 1,178 ಪರಿಹಾರ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆದಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ ಎಂದಿದ್ದಾರೆ.</p><p>ಡಾನಾ ಚಂಡಮಾರುತವು ಶುಕ್ರವಾರ ಬೆಳಿಗ್ಗೆ ಹೊತ್ತಿಗೆ 14 ಜಿಲ್ಲೆಗಳಲ್ಲಿ 108 ಕೇಂದ್ರಗಳ 1,671 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪ್ಪಳಿಸಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, 5,840 ಮನೆಗಳಿಗೆ ಸಂಪೂರ್ಣ ಅಥವಾ ಭಾಗಶಃ ಹಾನಿಯಾಗಿದೆ ಎಂದು ಸಚಿವ ಹೇಳಿದ್ದಾರೆ.</p><p>'ಈವರೆಗೆ ನೈಸರ್ಗಿಕ ವಿಪತ್ತು ಸಂಭವಿಸಿದಾಗ ಜನರು ಮನೆಗಳನ್ನು ಕಳೆದುಕೊಳ್ಳುತ್ತಿದ್ದರು. ನಂತರ ಪರಿಹಾರ ಪಡೆಯುತ್ತಿದ್ದರು. ಆದರೆ, ಈ ಬಾರಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಯಸುತ್ತಿದ್ದೇವೆ. ಅದಕ್ಕಾಗಿ ಇಟ್ಟಿಗೆ, ಸಿಮೆಂಟ್, ಕಬ್ಬಿಣ ಬಳಸಿ ನಿರ್ಮಿಸಿದ ಸುಸಜ್ಜಿತ ಮನೆಗಳನ್ನು ಹಂತ ಹಂತವಾಗಿ ವಿತರಿಸಲು ಬಯಸಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ.</p><p>ಚಂಡಮಾರುತ ಹಾಗೂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಇರುವ ಕಚ್ಚಾ ಮನೆಗಳ ಸರ್ವೆ ನಡೆಸಲು ಒಡಿಶಾ ಸರ್ಕಾರ ಯೋಜಿಸಿದೆ.</p>.DANA ಚಂಡಮಾರುತ ಅಪ್ಪಳಿಸಲು ಕ್ಷಣಗಣನೆ: ಯಾರು ಇಟ್ಟರೀ ಹೆಸರು? ಏನಿದರ ಅರ್ಥ?.Dana Cyclone | ತಗ್ಗಿದ ‘ಡಾನಾ’ ಪ್ರಭಾವ: ಚುರುಕು ಪಡೆದ ಪರಿಹಾರ ಕಾರ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>