ಶುಕ್ರವಾರ ರಾತ್ರಿ ಮಧುಕರ್ ಶರಣಾಗಿದ್ದಾನೆ ಎಂದು ಅತನ ವಕೀಲರಾದ ಎ.ಪಿ ಸಿಂಗ್ ಹೇಳಿದ್ದರು.
ಶನಿವಾರ ಮಧ್ಯಾಹ್ನ ಸುಮಾರು 2.15ರ ವೇಳೆಗೆ ಬಾಗ್ಲಾದಲ್ಲಿರುವ ಹಾಥರಸ್ ಜಿಲ್ಲಾ ಆಸ್ಪತ್ರೆಗೆ ಮಧುಕರ್ನನ್ನು ಕರೆತರಲಾಯಿತು. ಆಸ್ಪತ್ರೆಯ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಇತ್ತು.
ಘಟನೆ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ದೇವಪ್ರಕಾಶ ಮುಖ್ಯಸೇವಾದಾರನಾಗಿದ್ದ. ಘಟನೆ ಸಂಬಂಧ ಸಿಂಕದರ್ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ನಲ್ಲಿ ದಾಖಲಾಗಿದ್ದ ಏಕಮಾತ್ರ ಹೆಸರು ಈತನದ್ದು ಮಾತ್ರ.