ತಿರುವನಂತಪುರ: ವಯನಾಡ್ ಭೂಕುಸಿತ ದುರಂತ ಸಂತ್ರಸ್ತರಿಗೆ ‘ಸಮುದಾಯ ಜೀವನ’ (community living) ಮಾದರಿಯ ಟೌನ್ಶಿಪ್ ನಿರ್ಮಾಣ ಮಾಡಲು ಎರಡು ಸ್ಥಳಗಳನ್ನು ಸರ್ಕಾರ ಅಂತಿಮಗೊಳಿಸಿದೆ ಎಂದು ಸಚಿವ ಕೆ. ರಾಜನ್ ಶುಕ್ರವಾರ ಹೇಳಿದ್ದಾರೆ.
‘ಭೂಕುಸಿತ ಸಂತ್ರಸ್ತರ ಸಂಪೂರ್ಣ ಪುನರ್ವಸತಿಗಾಗಿ ನಾವು ಕಲ್ಪೆಟ್ಟಾ ಹಾಗೂ ಕೊಟ್ಟಪಾಡಿಯಲ್ಲಿ ಎರಡು ಸ್ಥಳಗಳನ್ನು ಸಮುದಾಯ ಜೀವನ ಮಾದರಿಯ ಟೌನ್ಶಿಪ್ ನಿರ್ಮಾಣ ಮಾಡಲು ಗುರುತಿಸಿದ್ದೇವೆ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಮನೆಗಳನ್ನು ಮಾತ್ರ ನೀಡಿ ನಾವು ಅವರಿಗೆ ಪುನರ್ವಸತಿ ಕಲ್ಪಿಸುವುದಿಲ್ಲ. ಬದಲಾಗಿ ಅವರಿಗೆ ಉದ್ಯೋಗ ಹಾಗೂ ಶಿಕ್ಷಣ ನೀಡಿ ಅವರಿಗೆ ಸಮಗ್ರ ಜೀವನ ನೀಡಲು ಉದ್ದೇಶಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.