ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad landslides: ರಕ್ಷಣಾ ಕಾರ್ಯಾಚರಣೆ ಮುಗಿಸಿ ಭಾಗಶಃ ವಾಪಸ್ ತೆರಳಿದ ಸೇನೆ

Published : 8 ಆಗಸ್ಟ್ 2024, 8:29 IST
Last Updated : 8 ಆಗಸ್ಟ್ 2024, 8:29 IST
ಫಾಲೋ ಮಾಡಿ
Comments

ವಯನಾಡ್: ಭೂಕುಸಿತ ಬಾಧಿತ ವಯನಾಡ್‌ನಲ್ಲಿ ರಕ್ಷಣಾ ಕಾರ್ಯದಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು, ಒಂಬತ್ತು ದಿನಗಳ ಬಳಿಕ ಗುರುವಾರ ಭಾಗಶಃ ಹಿಂದೆ ಕರೆಯಿಸಿಕೊಳ್ಳಲಾಗಿದೆ. ರಕ್ಷಣೆಗೆ ನೆರವಾಗಲು ಸೇನೆಯು ಇಲ್ಲಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದೆ. 

ಭಾಗಶಃ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುವ ನಿರ್ಧಾರವನ್ನು ರಾಜ್ಯ ಲೋಕೋಪಯೋಗಿ ಸಚಿವ ಪಿ.ಎ.ಮಹಮ್ಮದ್‌ ರಿಯಾಸ್ ಪ್ರಕಟಿಸಿದರು. ‘ಸೇನೆಯು ಬಹುತೇಕ ತನ್ನ ಕಾರ್ಯ ನೆರವೇರಿಸಿದ್ದು, ಅದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

ಸೇನೆಯು ಸುಮಾರು 190 ಅಡಿ ಉದ್ದದ ತಾತ್ಕಾಲಿಕ ಸೇತುವೆಯನ್ನು ದಾಖಲೆಯ ಕಡಿಮೆ ಸಮಯದಲ್ಲಿ ನಿರ್ಮಿಸಿತ್ತು. ಚುರುಕಾಗಿ ರಕ್ಷಣೆ ಮತ್ತು ಶೋಧ ಕಾರ್ಯವನ್ನು ನಡೆಸಿತ್ತು. ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಿಗೆ ಕೈಜೋಡಿಸಿತ್ತು ಎಂದು ಸ್ಮರಿಸಿದರು.

ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲು

ಕೊಚ್ಚಿ ವರದಿ: ಮುಂಡಕ್ಕೈ ಮತ್ತು ಚೂರಲ್‌ಮಲ ಸಂಭವಿಸಿದ ಭೂಕುಸಿತ ಅವಘಡ ಕುರಿತು ಕೇರಳ ಹೈಕೋರ್ಟ್ ಗುರುವಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ವಿ.ಎಂ.ಶ್ಯಾಮ್ ಕುಮಾರ್ ಅವರಿದ್ದ ಪೀಠವು, ಮಾಧ್ಯಮ ವರದಿಗಳ ಆಧಾರದಲ್ಲಿ ಪ್ರಕರಣ ದಾಖಲಿಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದೆ. ಶುಕ್ರವಾರ ಈ ಪ್ರಕರಣ ಪರಿಶೀಲನೆಗೆ ಬರಲಿಲಿದೆ. 

ಉಳಿದವರ ನೆರವಿಗೆ ಕಾರ್ಯಪಡೆ ರಚನೆ
(ತಿರುವನಂತಪುರ ವರದಿ): ಭೂಕುಸಿತದಿಂದ ನಷ್ಟ ಅನುಭವಿಸಿದವರಿಗೆ ವಿಮೆ ಪಡೆಯಲು ನೆರವಾಗಲು ಕೇರಳ ಸರ್ಕಾರ ಕಾರ್ಯಪಡೆ ರಚಿಸಿದೆ. ಸಂಪುಟ ಉಪ ಸಮಿತಿಯ ಶಿಫಾರಸು ಆಧರಿಸಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಯವರ ಕಚೇರಿ ತಿಳಿಸಿದೆ. ಉಪ ವಿಭಾಗಾಧಿಕಾರಿ (ಕಂದಾಯ ವಸೂಲಿ) ಕೆ.ಗೋಪಿನಾಥ್ ತಂಡದ ನೇತೃತ್ವ ವಹಿಸುವರು. ವಾಹನವಿಮೆ, ಜೀವವಿಮೆ, ಗೃಹವಿಮೆ, ಬೆಳೆ ವಿಮೆ ಮತ್ತು ಜಾನುವಾರು ವಿಮೆಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಿ, ತ್ವರಿತ ಇತ್ಯರ್ಥಪಡಿಸಲು ಇದು ನೆರವಾಗಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT