ದಶರಥ ಮಹಾರಾಜನು ಒಮ್ಮೆ ತನ್ನ ಅರಮನೆಯ ಸಂಪದ್ಭರಿತ ತೋಟದಲ್ಲಿ ತಿರುಗಾಡುತ್ತಿದ್ದನು. ಅಲ್ಲಿ ಒಂದು ತಾಯಿ ಗುಬ್ಬಚ್ಚಿ ಬಾಯಿ ತೆರೆದ ಮರಿಗೆ ಗುಟುಕು ಕೊಡುತ್ತಿದ್ದುದನ್ನು ನೋಡಿದನು. ಮಕ್ಕಳನ್ನು ಪಡೆದ ಹಕ್ಕಿಯ ಸಿರಿತನವು ಚಕ್ರವರ್ತಿಗೆ ತನ್ನ ಬಡತನವನ್ನು ಮೂದಲಿಸಿದಂತಾಯಿತು. ಉದ್ಯಾನದಿಂದ ಹಿಂತಿರುಗಿ, ಗುರು ವಾಮದೇವ, ವಸಿಷ್ಠ, ಸಚಿವರನ್ನು ಕರೆಸಿ,