<p><strong>ನವದೆಹಲಿ:</strong> ಭಾರತವನ್ನು 2047ರ ಹೊತ್ತಿಗೆ ಜಗತ್ತಿನ ಅತ್ಯಂತ ಶ್ರೀಮಂತ ದೇಶವಾಗಿಸುವ ಸಂಕಲ್ಪವನ್ನು ಹೊತ್ತಿರುವ 2024–25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದ್ದಾರೆ. ಆದರೆ, ಇದಕ್ಕಾಗಿ ಸ್ಪಷ್ಟವಾದ ನೀಲನಕ್ಷೆಯನ್ನು ನಿರ್ಮಲಾ ಅವರು ಹಾಕಿಕೊಂಡಿಲ್ಲ. </p>.<p>ಸಂಪ್ರದಾಯದಂತೆಯೇ, ಮಧ್ಯಂತರ ಬಜೆಟ್ನಲ್ಲಿ ಪ್ರತ್ಯಕ್ಷ, ಪರೋಕ್ಷ ಮತ್ತು ಕಾರ್ಪೊರೇಟ್ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಲೋಕಸಭೆಗೆ ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ಹಾಗಿದ್ದರೂ ಮತದಾರರ ಮೇಲೆ ಪರಿಣಾಮ ಬೀರಬಲ್ಲ ವಿಶೇಷ ಘೋಷಣೆಗಳನ್ನು ಮಾಡಲಾಗಿಲ್ಲ. ಆದರೆ, ಚುನಾವಣೆಯ ಮೇಲೆ ಪ್ರಭಾವ ಬೀರಬಹುದಾದ ಕೆಲವು ಸಾಮಾಜಿಕ ಸಮೀಕರಣಗಳನ್ನು ರೂಪಿಸುವ ಪ್ರಯತ್ನ ನಡೆಸಲಾಗಿದೆ.</p>.<p>ಬಡವರು, ಮಹಿಳೆಯರು, ಯುವಜನರು ಮತ್ತು ರೈತರು ಎಂಬ ನಾಲ್ಕು ಜಾತಿಗಳಿಗೆ ನಾವು ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದು ನಿರ್ಮಲಾ ಅವರು ಪ್ರತಿಪಾದಿಸಿದ್ದಾರೆ. ಈ ನಾಲ್ಕು ವರ್ಗಗಳ ಮತಬ್ಯಾಂಕ್ ಅನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಬಿಜೆಪಿ ಹಿಂದಿನಿಂದಲೂ ಮಾಡುತ್ತಲೇ ಬಂದಿದೆ. </p>.<p>2024–25ನೇ ಆರ್ಥಿಕ ವರ್ಷದಲ್ಲಿ ಬಂಡವಾಳ ವೆಚ್ಚವನ್ನು ಶೇ 11ರಷ್ಟು ಏರಿಕೆ ಮಾಡಲಾಗಿದೆ. ಒಟ್ಟು ₹11,11,111 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಆರ್ಥಿಕ ಕೊರತೆಯನ್ನು ಕಡಿಮೆ ಮಾಡುವುದು ಮತ್ತು ಬಂಡವಾಳ ವೆಚ್ಚವನ್ನು ಹೆಚ್ಚಿಸುವುದು ಆರ್ಥಿಕತೆಯ ಕುರಿತು ಸಕಾರಾತ್ಮಕವಾದ ಸಂದೇಶವನ್ನು ನೀಡುತ್ತದೆ. ಈ ಮೂಲಕ ಹೆಚ್ಚು ಬಂಡವಾಳ ಆಕರ್ಷಣೆಯ ಪ್ರಯತ್ನವನ್ನೂ ನಿರ್ಮಲಾ ಅವರು ಮಾಡಿದ್ದಾರೆ. </p>.<p>ಬಜೆಟ್ನ ಉದ್ದಕ್ಕೂ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ‘ಸಾಧನೆ’ಗಳನ್ನು ನಿರ್ಮಲಾ ಅವರು ಬಣ್ಣಿಸಿದ್ದಾರೆ. ‘ಮುಂದಿನ ಐದು ವರ್ಷಗಳಲ್ಲಿ ಅಭೂತಪೂರ್ವ ಪ್ರಗತಿಯು ಸಾಧ್ಯವಾಗಲಿದೆ. 2047ರಲ್ಲಿ ಭಾರತವು ಶ್ರೀಮಂತ ದೇಶವಾಗುವ ಕನಸು ನನಸಾಗುವ ಸುವರ್ಣ ಕ್ಷಣಗಳು ಇವು’ ಎಂದು ಅವರು ಹೇಳಿದ್ದಾರೆ. </p>.<p>ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಕಳೆದ ಕೆಲವು ವರ್ಷಗಳಲ್ಲಿ ಸತತವಾಗಿ ಅನುದಾನ ಕಡಿತ ಮಾಡಲಾಗಿತ್ತು. ಆದರೆ, ಈ ಬಾರಿ ಈ ಮೊತ್ತವನ್ನು ಹೆಚ್ಚಿಸುವ ಮೂಲಕ ನಾಲ್ಕು ಸ್ತಂಭಗಳಲ್ಲಿ ಎರಡು ಸ್ತಂಭಗಳಾದ ಬಡವರು ಮತ್ತು ರೈತರಿಗೆ ಅನುಕೂಲ ಮಾಡಲಾಗಿದೆ. ಈ ವರ್ಷ ನರೇಗಾಕ್ಕೆ ₹1.77 ಲಕ್ಷ ಕೋಟಿ ನಿಗದಿ ಮಾಡಲಾಗಿದೆ. ಕಳೆದ ವರ್ಷ ಈ ಮೊತ್ತವು ₹1.57 ಲಕ್ಷ ಕೋಟಿ ಇತ್ತು.</p>.<p>ಲಖ್ಪತ್ ದೀದಿ ಯೋಜನೆಯು ಗ್ರಾಮೀಣ ಮಹಿಳೆಯರನ್ನು ಆಕರ್ಷಿಸುವ ಯತ್ನ. ಹಾಗೆಯೇ ಗರ್ಭಕಂಠ ಕ್ಯಾನ್ಸರ್ಗೆ ಲಸಿಕೆ ನೀಡಿಕೆ ಯೋಜನೆಯನ್ನೂ ಪ್ರಕಟಿಸಲಾಗಿದೆ. ಹೆಚ್ಚು ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು, ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಲಾಗುವುದು ಎಂಬ ಭರವಸೆಗಳೂ ಬಜೆಟ್ನಲ್ಲಿ ಇದ್ದು ಯುವಜನರ ಮನಗೆಲ್ಲುವ ಪ್ರಯತ್ನ ಇದಾಗಿದೆ. </p>.<p>* ಆರ್ಥಿಕ ಶಿಸ್ತಿಗೆ ಒತ್ತು: ಆರ್ಥಿಕ ಕೊರತೆಯನ್ನು ಶೇ 5.1ಕ್ಕೆ ಇಳಿಸುವ ಗುರಿ ನಿಗದಿ ಮಾಡಲಾಗಿದೆ. ಕಳೆದ ಬಾರಿ ಇದು ಶೇ 5.9ರಷ್ಟು ಇತ್ತು</p>.<p>* ರಕ್ಷಣೆಗೆ ₹6.21 ಲಕ್ಷ ಕೋಟಿ ನಿಗದಿ ಮಾಡಲಾಗಿದೆ: ಗಡಿ ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ</p>.<p><strong>2014ರ ಹಿಂದಿನ ಸ್ಥಿತಿಯ ಶ್ವೇತಪತ್ರ</strong></p><p>ಈ ಸರ್ಕಾರವು ಅರ್ಥ ವ್ಯವಸ್ಥೆಯನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ. ಇದಕ್ಕೆ ತಿರುಗೇಟು ನೀಡಿರುವ ನಿರ್ಮಲಾ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಾಗ ಸ್ಥಿತಿ ಹೇಗಿತ್ತು ಎಂಬುದರ ಕುರಿತು ಶ್ವೇತಪತ್ರ ಹೊರಡಿಸಲಾಗುವುದು ಎಂದು ಹೇಳಿದ್ದಾರೆ. </p>.<p>ಎನ್ಡಿಎ ಸರ್ಕಾರವು ಅಧಿಕಾರಕ್ಕೆ ಬಂದಾಗ ಆಡಳಿತ ವ್ಯವಸ್ಥೆಯನ್ನು ಹಳಿಗೆ ತರುವುದು ಅಗಾಧವಾದ ಕೆಲಸವಾಗಿತ್ತು. 2014ರ ಹಿಂದೆ ಇದ್ದ ಪ್ರತಿ ಸವಾಲನ್ನೂ ನಮ್ಮ ಆರ್ಥಿಕ ನಿರ್ವಹಣೆ ಮತ್ತು ಆಡಳಿತ ಶೈಲಿಯು ಸರಿಪಡಿಸಿದೆ. ದೇಶವನ್ನು ಸುಸ್ಥಿರ ಪ್ರಗತಿಯ ದೃಢ ಹಾದಿಯಲ್ಲಿ ಮುನ್ನಡೆಸಲಾಗಿದೆ ಎಂದಿದ್ದಾರೆ. </p>.<p>‘2014ರಲ್ಲಿ ನಾವು ಎಲ್ಲಿದ್ದೆವು ಮತ್ತು ಈಗ ಎಲ್ಲಿದ್ದೇವೆ ಎಂಬುದನ್ನು ನಾವು ನೋಡಿಕೊಳ್ಳುವುದು ಸೂಕ್ತ. ಆ ದಿನಗಳ ದುರಾಡಳಿತದಿಂದ ಪಾಠ ಕಲಿಯುವುದಷ್ಟೇ ಇದರ ಉದ್ದೇಶ’ ಎಂದು ನಿರ್ಮಲಾ ಹೇಳಿದ್ದಾರೆ. </p>.<p><strong>ಜನಸಂಖ್ಯೆ ಏರಿಕೆ: ಅಧ್ಯಯನಕ್ಕೆ ಸಮಿತಿ</strong></p><p>ಜನಸಂಖ್ಯೆ ಹೆಚ್ಚಳ ಮತ್ತು ಜನಸಂಖ್ಯಾ ಸ್ವರೂಪದಲ್ಲಿ ಆಗಿರುವ ಬದಲಾವಣೆಯ ಸಮಗ್ರ ಅಧ್ಯಯನ ನಡೆಸುವುದಕ್ಕಾಗಿ ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ನಿರ್ಮಲಾ ಹೇಳಿದ್ದಾರೆ. ಮಧ್ಯಂತರ ಬಜೆಟ್ ಮಂಡನೆ ವೇಳೆ ಈ ವಿಷಯವನ್ನು ಅವರು ಪ್ರಕಟಿಸಿದರು. ಜನಸಂಖ್ಯೆ ನಿಯಂತ್ರಿಸಬೇಕು ಎಂಬುದು ಸಂಘ ಪರಿವಾರದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. </p>.<p>ಈ ಘೋಷಣೆಗೆ ವಿರೋಧವೂ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯಕ್ಕೆ ಹೊಡೆತ ನೀಡುವುದು ಆರ್ಎಸ್ಎಸ್–ಬಿಜೆಪಿಯ ಅಚ್ಚುಮೆಚ್ಚಿನ ವಿಚಾರವಾಗಿದೆ. ಹಾಗಾಗಿ, ಈ ಪ್ರಸ್ತಾವವನ್ನು ಅನುಮಾನದಿಂದಲೇ ನೋಡಬೇಕಾಗುತ್ತದೆ ಎಂದು ಸಿಪಿಎಂನ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ. </p>.<p>‘ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಇದು ಎಂಬಂತೆ ಕಾಣಿಸುತ್ತಿದೆ. ಮುಸ್ಲಿಮರಲ್ಲಿ ಜನಸಂಖ್ಯೆ ಏರಿಕೆಯ ದರವು ಇಳಿಕೆಯಾಗಿದೆ. ಹಾಗಿದ್ದರೂ ಜನಸಂಖ್ಯೆ ಏರಿಕೆಗೆ ಆ ಸಮುದಾಯದತ್ತ ಬೆರಳು ತೋರಲಾಗುತ್ತಿದೆ. ಶಿಕ್ಷಣ ನೀಡುವ ಮೂಲಕ ಜನಸಂಖ್ಯೆ ಏರಿಕೆಯ ದರವನ್ನು ಕಡಿಮೆ ಮಾಡಲು ಸಾಧ್ಯವಿದೆ. ಆದರೆ, ಈ ಸರ್ಕಾರವು ಬೇರೆ ದಿಕ್ಕಿನತ್ತ ನೋಡುತ್ತಿದೆ’ ಎಂದು ಬ್ರಿಟ್ಟಾಸ್ ಟೀಕಿಸಿದ್ದಾರೆ. </p>.<p>ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಜೆಪಿಯ ಹಲವು ಸಂಸದರು ಈ ಹಿಂದೆ ಖಾಸಗಿ ಮಸೂದೆಗಳನ್ನು ಮಂಡಿಸಿದ್ದರು. ಕೆಲವು ಜಿಲ್ಲೆಗಳಲ್ಲಿ ಜನಸಂಖ್ಯೆ ಏರಿಕೆ ಆಗುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. </p>.<h2>ಲೆಕ್ಕಕ್ಕೆ ಸಿಗದ ಒಂದು ಪೈಸೆ</h2><p>ಸರ್ಕಾರಕ್ಕೆ ಯಾವೆಲ್ಲಾ ಮೂಲಗಳಿಂದ ಬಂದ ಆದಾಯ ಹಾಗೂ ಆ ಆದಾಯವನ್ನು ಯಾವೆಲ್ಲಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ ಕುರಿತ ಸ್ಥೂಲ ಚಿತ್ರಣವನ್ನು ‘ರೂಪಾಯಿ ಜಮೆ ಮತ್ತು ವೆಚ್ಚ’ ಸ್ವರೂಪದಲ್ಲಿ ವಿವರಿಸಲಾಗುತ್ತದೆ. ಸರ್ಕಾರದ ಒಂದು ರೂಪಾಯಿ ಆದಾಯವು ಯಾವೆಲ್ಲಾ ಮೂಲಗಳಿಂದ ಬರುತ್ತದೆ ಎಂಬುದನ್ನು ಪೈಸೆಗಳ ಲೆಕ್ಕಾಚಾರದಲ್ಲಿ ವಿವರಿಸಲಾಗುತ್ತದೆ. ಆ ಎಲ್ಲಾ ಮೂಲಗಳನ್ನು ಒಟ್ಟುಗೂಡಿಸಿದಾಗ ಅದು ಒಂದು ರೂಪಾಯಿ ಅಥವಾ ನೂರು ಪೈಸೆ ಆಗಬೇಕು. ವೆಚ್ಚಕ್ಕೂ ಇದೇ ನಿಯಮ. ಆದರೆ, ಈ ಬಜೆಟ್ನಲ್ಲಿ ನೀಡಲಾದ ‘ರೂಪಾಯಿ ಜಮೆ ಮತ್ತು ವೆಚ್ಚ’ ವಿವರದಲ್ಲಿ 99 ಪೈಸೆಗಳಷ್ಟು ಮಾಹಿತಿ ಮಾತ್ರವಿದೆ. ಉಳಿದ ಒಂದು ಪೈಸೆಯ ಮಾಹಿತಿ ಇಲ್ಲವೇ ಇಲ್ಲ. ಜಮೆ ಮತ್ತು ವೆಚ್ಚ ಎರಡರಲ್ಲೂ ಹೀಗೆ ಆಗಿದೆ.</p>.<p><strong>ರೈಲು: ರಾಜ್ಯಕ್ಕೆ ₹7,524 ಕೋಟಿ </strong></p><p><strong>ನವದೆಹಲಿ:</strong> ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ, ದ್ವಿಪಥ ಹಾಗೂ ಗೇಜ್ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಮಧ್ಯಂತರ ಬಜೆಟ್ನಲ್ಲಿ ₹7,524 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯಕ್ಕೆ ರೈಲ್ವೆ ಅನುದಾನ ₹37 ಕೋಟಿ ಕಡಿಮೆಯಾಗಿದೆ. ಬೆಂಗಳೂರಿನ ಉಪನಗರ ರೈಲು ಹಾಗೂ ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗಳಿಗೂ ಈ ಸಲ ಯಾವುದೇ ಅನುದಾನ ಮೀಸಲಿಟ್ಟಿಲ್ಲ. </p><p>ಹನಿ ನೀರಾವರಿ ಮೂಲಕ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ನೀಡಲಾಗುವುದು ಎಂದು ಕಳೆದ ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಆದರೆ, ಕೇಂದ್ರ ಅನುದಾನ ನೀಡಿರಲಿಲ್ಲ. ಈ ವರ್ಷದ ಬಜೆಟ್ನಲ್ಲಾದರೂ ಅನುದಾನ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದರು. ಆದರೆ, ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ.</p>.<div><blockquote>ಇದೊಂದು ಐತಿಹಾಸಿಕ ಬಜೆಟ್. ₹ 11.11 ಲಕ್ಷ ಕೋಟಿ ಬಂಡವಾಳ ವೆಚ್ಚಕ್ಕೆ ಅವಕಾಶ ಕಲ್ಪಿಸುವ ಜೊತೆಗೆ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿ ಇರಿಸಿದೆ. </blockquote><span class="attribution">–ನರೇಂದ್ರ ಮೋದಿ, ಪ್ರಧಾನಿ</span></div>.<div><blockquote>ಕೇಂದ್ರದ ಮಧ್ಯಂತರ ಬಜೆಟ್ನಲ್ಲಿ ಹೊಣೆಗಾರಿಕೆ ಮತ್ತು ಮುನ್ನೋಟ ಎರಡೂ ಕಾಣೆಯಾಗಿವೆ! ಬಡವರು ಮತ್ತು ಮಧ್ಯಮ ವರ್ಗದವರ ನೋವನ್ನು ಕಡಿಮೆ ಮಾಡುವ ಯಾವ ಯೋಜನೆಗಳೂ ಇಲ್ಲ.</blockquote><span class="attribution">–ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತವನ್ನು 2047ರ ಹೊತ್ತಿಗೆ ಜಗತ್ತಿನ ಅತ್ಯಂತ ಶ್ರೀಮಂತ ದೇಶವಾಗಿಸುವ ಸಂಕಲ್ಪವನ್ನು ಹೊತ್ತಿರುವ 2024–25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದ್ದಾರೆ. ಆದರೆ, ಇದಕ್ಕಾಗಿ ಸ್ಪಷ್ಟವಾದ ನೀಲನಕ್ಷೆಯನ್ನು ನಿರ್ಮಲಾ ಅವರು ಹಾಕಿಕೊಂಡಿಲ್ಲ. </p>.<p>ಸಂಪ್ರದಾಯದಂತೆಯೇ, ಮಧ್ಯಂತರ ಬಜೆಟ್ನಲ್ಲಿ ಪ್ರತ್ಯಕ್ಷ, ಪರೋಕ್ಷ ಮತ್ತು ಕಾರ್ಪೊರೇಟ್ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಲೋಕಸಭೆಗೆ ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ಹಾಗಿದ್ದರೂ ಮತದಾರರ ಮೇಲೆ ಪರಿಣಾಮ ಬೀರಬಲ್ಲ ವಿಶೇಷ ಘೋಷಣೆಗಳನ್ನು ಮಾಡಲಾಗಿಲ್ಲ. ಆದರೆ, ಚುನಾವಣೆಯ ಮೇಲೆ ಪ್ರಭಾವ ಬೀರಬಹುದಾದ ಕೆಲವು ಸಾಮಾಜಿಕ ಸಮೀಕರಣಗಳನ್ನು ರೂಪಿಸುವ ಪ್ರಯತ್ನ ನಡೆಸಲಾಗಿದೆ.</p>.<p>ಬಡವರು, ಮಹಿಳೆಯರು, ಯುವಜನರು ಮತ್ತು ರೈತರು ಎಂಬ ನಾಲ್ಕು ಜಾತಿಗಳಿಗೆ ನಾವು ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದು ನಿರ್ಮಲಾ ಅವರು ಪ್ರತಿಪಾದಿಸಿದ್ದಾರೆ. ಈ ನಾಲ್ಕು ವರ್ಗಗಳ ಮತಬ್ಯಾಂಕ್ ಅನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಬಿಜೆಪಿ ಹಿಂದಿನಿಂದಲೂ ಮಾಡುತ್ತಲೇ ಬಂದಿದೆ. </p>.<p>2024–25ನೇ ಆರ್ಥಿಕ ವರ್ಷದಲ್ಲಿ ಬಂಡವಾಳ ವೆಚ್ಚವನ್ನು ಶೇ 11ರಷ್ಟು ಏರಿಕೆ ಮಾಡಲಾಗಿದೆ. ಒಟ್ಟು ₹11,11,111 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಆರ್ಥಿಕ ಕೊರತೆಯನ್ನು ಕಡಿಮೆ ಮಾಡುವುದು ಮತ್ತು ಬಂಡವಾಳ ವೆಚ್ಚವನ್ನು ಹೆಚ್ಚಿಸುವುದು ಆರ್ಥಿಕತೆಯ ಕುರಿತು ಸಕಾರಾತ್ಮಕವಾದ ಸಂದೇಶವನ್ನು ನೀಡುತ್ತದೆ. ಈ ಮೂಲಕ ಹೆಚ್ಚು ಬಂಡವಾಳ ಆಕರ್ಷಣೆಯ ಪ್ರಯತ್ನವನ್ನೂ ನಿರ್ಮಲಾ ಅವರು ಮಾಡಿದ್ದಾರೆ. </p>.<p>ಬಜೆಟ್ನ ಉದ್ದಕ್ಕೂ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ‘ಸಾಧನೆ’ಗಳನ್ನು ನಿರ್ಮಲಾ ಅವರು ಬಣ್ಣಿಸಿದ್ದಾರೆ. ‘ಮುಂದಿನ ಐದು ವರ್ಷಗಳಲ್ಲಿ ಅಭೂತಪೂರ್ವ ಪ್ರಗತಿಯು ಸಾಧ್ಯವಾಗಲಿದೆ. 2047ರಲ್ಲಿ ಭಾರತವು ಶ್ರೀಮಂತ ದೇಶವಾಗುವ ಕನಸು ನನಸಾಗುವ ಸುವರ್ಣ ಕ್ಷಣಗಳು ಇವು’ ಎಂದು ಅವರು ಹೇಳಿದ್ದಾರೆ. </p>.<p>ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಕಳೆದ ಕೆಲವು ವರ್ಷಗಳಲ್ಲಿ ಸತತವಾಗಿ ಅನುದಾನ ಕಡಿತ ಮಾಡಲಾಗಿತ್ತು. ಆದರೆ, ಈ ಬಾರಿ ಈ ಮೊತ್ತವನ್ನು ಹೆಚ್ಚಿಸುವ ಮೂಲಕ ನಾಲ್ಕು ಸ್ತಂಭಗಳಲ್ಲಿ ಎರಡು ಸ್ತಂಭಗಳಾದ ಬಡವರು ಮತ್ತು ರೈತರಿಗೆ ಅನುಕೂಲ ಮಾಡಲಾಗಿದೆ. ಈ ವರ್ಷ ನರೇಗಾಕ್ಕೆ ₹1.77 ಲಕ್ಷ ಕೋಟಿ ನಿಗದಿ ಮಾಡಲಾಗಿದೆ. ಕಳೆದ ವರ್ಷ ಈ ಮೊತ್ತವು ₹1.57 ಲಕ್ಷ ಕೋಟಿ ಇತ್ತು.</p>.<p>ಲಖ್ಪತ್ ದೀದಿ ಯೋಜನೆಯು ಗ್ರಾಮೀಣ ಮಹಿಳೆಯರನ್ನು ಆಕರ್ಷಿಸುವ ಯತ್ನ. ಹಾಗೆಯೇ ಗರ್ಭಕಂಠ ಕ್ಯಾನ್ಸರ್ಗೆ ಲಸಿಕೆ ನೀಡಿಕೆ ಯೋಜನೆಯನ್ನೂ ಪ್ರಕಟಿಸಲಾಗಿದೆ. ಹೆಚ್ಚು ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು, ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಲಾಗುವುದು ಎಂಬ ಭರವಸೆಗಳೂ ಬಜೆಟ್ನಲ್ಲಿ ಇದ್ದು ಯುವಜನರ ಮನಗೆಲ್ಲುವ ಪ್ರಯತ್ನ ಇದಾಗಿದೆ. </p>.<p>* ಆರ್ಥಿಕ ಶಿಸ್ತಿಗೆ ಒತ್ತು: ಆರ್ಥಿಕ ಕೊರತೆಯನ್ನು ಶೇ 5.1ಕ್ಕೆ ಇಳಿಸುವ ಗುರಿ ನಿಗದಿ ಮಾಡಲಾಗಿದೆ. ಕಳೆದ ಬಾರಿ ಇದು ಶೇ 5.9ರಷ್ಟು ಇತ್ತು</p>.<p>* ರಕ್ಷಣೆಗೆ ₹6.21 ಲಕ್ಷ ಕೋಟಿ ನಿಗದಿ ಮಾಡಲಾಗಿದೆ: ಗಡಿ ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ</p>.<p><strong>2014ರ ಹಿಂದಿನ ಸ್ಥಿತಿಯ ಶ್ವೇತಪತ್ರ</strong></p><p>ಈ ಸರ್ಕಾರವು ಅರ್ಥ ವ್ಯವಸ್ಥೆಯನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ. ಇದಕ್ಕೆ ತಿರುಗೇಟು ನೀಡಿರುವ ನಿರ್ಮಲಾ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಾಗ ಸ್ಥಿತಿ ಹೇಗಿತ್ತು ಎಂಬುದರ ಕುರಿತು ಶ್ವೇತಪತ್ರ ಹೊರಡಿಸಲಾಗುವುದು ಎಂದು ಹೇಳಿದ್ದಾರೆ. </p>.<p>ಎನ್ಡಿಎ ಸರ್ಕಾರವು ಅಧಿಕಾರಕ್ಕೆ ಬಂದಾಗ ಆಡಳಿತ ವ್ಯವಸ್ಥೆಯನ್ನು ಹಳಿಗೆ ತರುವುದು ಅಗಾಧವಾದ ಕೆಲಸವಾಗಿತ್ತು. 2014ರ ಹಿಂದೆ ಇದ್ದ ಪ್ರತಿ ಸವಾಲನ್ನೂ ನಮ್ಮ ಆರ್ಥಿಕ ನಿರ್ವಹಣೆ ಮತ್ತು ಆಡಳಿತ ಶೈಲಿಯು ಸರಿಪಡಿಸಿದೆ. ದೇಶವನ್ನು ಸುಸ್ಥಿರ ಪ್ರಗತಿಯ ದೃಢ ಹಾದಿಯಲ್ಲಿ ಮುನ್ನಡೆಸಲಾಗಿದೆ ಎಂದಿದ್ದಾರೆ. </p>.<p>‘2014ರಲ್ಲಿ ನಾವು ಎಲ್ಲಿದ್ದೆವು ಮತ್ತು ಈಗ ಎಲ್ಲಿದ್ದೇವೆ ಎಂಬುದನ್ನು ನಾವು ನೋಡಿಕೊಳ್ಳುವುದು ಸೂಕ್ತ. ಆ ದಿನಗಳ ದುರಾಡಳಿತದಿಂದ ಪಾಠ ಕಲಿಯುವುದಷ್ಟೇ ಇದರ ಉದ್ದೇಶ’ ಎಂದು ನಿರ್ಮಲಾ ಹೇಳಿದ್ದಾರೆ. </p>.<p><strong>ಜನಸಂಖ್ಯೆ ಏರಿಕೆ: ಅಧ್ಯಯನಕ್ಕೆ ಸಮಿತಿ</strong></p><p>ಜನಸಂಖ್ಯೆ ಹೆಚ್ಚಳ ಮತ್ತು ಜನಸಂಖ್ಯಾ ಸ್ವರೂಪದಲ್ಲಿ ಆಗಿರುವ ಬದಲಾವಣೆಯ ಸಮಗ್ರ ಅಧ್ಯಯನ ನಡೆಸುವುದಕ್ಕಾಗಿ ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ನಿರ್ಮಲಾ ಹೇಳಿದ್ದಾರೆ. ಮಧ್ಯಂತರ ಬಜೆಟ್ ಮಂಡನೆ ವೇಳೆ ಈ ವಿಷಯವನ್ನು ಅವರು ಪ್ರಕಟಿಸಿದರು. ಜನಸಂಖ್ಯೆ ನಿಯಂತ್ರಿಸಬೇಕು ಎಂಬುದು ಸಂಘ ಪರಿವಾರದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. </p>.<p>ಈ ಘೋಷಣೆಗೆ ವಿರೋಧವೂ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯಕ್ಕೆ ಹೊಡೆತ ನೀಡುವುದು ಆರ್ಎಸ್ಎಸ್–ಬಿಜೆಪಿಯ ಅಚ್ಚುಮೆಚ್ಚಿನ ವಿಚಾರವಾಗಿದೆ. ಹಾಗಾಗಿ, ಈ ಪ್ರಸ್ತಾವವನ್ನು ಅನುಮಾನದಿಂದಲೇ ನೋಡಬೇಕಾಗುತ್ತದೆ ಎಂದು ಸಿಪಿಎಂನ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ. </p>.<p>‘ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಇದು ಎಂಬಂತೆ ಕಾಣಿಸುತ್ತಿದೆ. ಮುಸ್ಲಿಮರಲ್ಲಿ ಜನಸಂಖ್ಯೆ ಏರಿಕೆಯ ದರವು ಇಳಿಕೆಯಾಗಿದೆ. ಹಾಗಿದ್ದರೂ ಜನಸಂಖ್ಯೆ ಏರಿಕೆಗೆ ಆ ಸಮುದಾಯದತ್ತ ಬೆರಳು ತೋರಲಾಗುತ್ತಿದೆ. ಶಿಕ್ಷಣ ನೀಡುವ ಮೂಲಕ ಜನಸಂಖ್ಯೆ ಏರಿಕೆಯ ದರವನ್ನು ಕಡಿಮೆ ಮಾಡಲು ಸಾಧ್ಯವಿದೆ. ಆದರೆ, ಈ ಸರ್ಕಾರವು ಬೇರೆ ದಿಕ್ಕಿನತ್ತ ನೋಡುತ್ತಿದೆ’ ಎಂದು ಬ್ರಿಟ್ಟಾಸ್ ಟೀಕಿಸಿದ್ದಾರೆ. </p>.<p>ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಜೆಪಿಯ ಹಲವು ಸಂಸದರು ಈ ಹಿಂದೆ ಖಾಸಗಿ ಮಸೂದೆಗಳನ್ನು ಮಂಡಿಸಿದ್ದರು. ಕೆಲವು ಜಿಲ್ಲೆಗಳಲ್ಲಿ ಜನಸಂಖ್ಯೆ ಏರಿಕೆ ಆಗುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. </p>.<h2>ಲೆಕ್ಕಕ್ಕೆ ಸಿಗದ ಒಂದು ಪೈಸೆ</h2><p>ಸರ್ಕಾರಕ್ಕೆ ಯಾವೆಲ್ಲಾ ಮೂಲಗಳಿಂದ ಬಂದ ಆದಾಯ ಹಾಗೂ ಆ ಆದಾಯವನ್ನು ಯಾವೆಲ್ಲಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ ಕುರಿತ ಸ್ಥೂಲ ಚಿತ್ರಣವನ್ನು ‘ರೂಪಾಯಿ ಜಮೆ ಮತ್ತು ವೆಚ್ಚ’ ಸ್ವರೂಪದಲ್ಲಿ ವಿವರಿಸಲಾಗುತ್ತದೆ. ಸರ್ಕಾರದ ಒಂದು ರೂಪಾಯಿ ಆದಾಯವು ಯಾವೆಲ್ಲಾ ಮೂಲಗಳಿಂದ ಬರುತ್ತದೆ ಎಂಬುದನ್ನು ಪೈಸೆಗಳ ಲೆಕ್ಕಾಚಾರದಲ್ಲಿ ವಿವರಿಸಲಾಗುತ್ತದೆ. ಆ ಎಲ್ಲಾ ಮೂಲಗಳನ್ನು ಒಟ್ಟುಗೂಡಿಸಿದಾಗ ಅದು ಒಂದು ರೂಪಾಯಿ ಅಥವಾ ನೂರು ಪೈಸೆ ಆಗಬೇಕು. ವೆಚ್ಚಕ್ಕೂ ಇದೇ ನಿಯಮ. ಆದರೆ, ಈ ಬಜೆಟ್ನಲ್ಲಿ ನೀಡಲಾದ ‘ರೂಪಾಯಿ ಜಮೆ ಮತ್ತು ವೆಚ್ಚ’ ವಿವರದಲ್ಲಿ 99 ಪೈಸೆಗಳಷ್ಟು ಮಾಹಿತಿ ಮಾತ್ರವಿದೆ. ಉಳಿದ ಒಂದು ಪೈಸೆಯ ಮಾಹಿತಿ ಇಲ್ಲವೇ ಇಲ್ಲ. ಜಮೆ ಮತ್ತು ವೆಚ್ಚ ಎರಡರಲ್ಲೂ ಹೀಗೆ ಆಗಿದೆ.</p>.<p><strong>ರೈಲು: ರಾಜ್ಯಕ್ಕೆ ₹7,524 ಕೋಟಿ </strong></p><p><strong>ನವದೆಹಲಿ:</strong> ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ, ದ್ವಿಪಥ ಹಾಗೂ ಗೇಜ್ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಮಧ್ಯಂತರ ಬಜೆಟ್ನಲ್ಲಿ ₹7,524 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯಕ್ಕೆ ರೈಲ್ವೆ ಅನುದಾನ ₹37 ಕೋಟಿ ಕಡಿಮೆಯಾಗಿದೆ. ಬೆಂಗಳೂರಿನ ಉಪನಗರ ರೈಲು ಹಾಗೂ ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗಳಿಗೂ ಈ ಸಲ ಯಾವುದೇ ಅನುದಾನ ಮೀಸಲಿಟ್ಟಿಲ್ಲ. </p><p>ಹನಿ ನೀರಾವರಿ ಮೂಲಕ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ನೀಡಲಾಗುವುದು ಎಂದು ಕಳೆದ ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಆದರೆ, ಕೇಂದ್ರ ಅನುದಾನ ನೀಡಿರಲಿಲ್ಲ. ಈ ವರ್ಷದ ಬಜೆಟ್ನಲ್ಲಾದರೂ ಅನುದಾನ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದರು. ಆದರೆ, ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ.</p>.<div><blockquote>ಇದೊಂದು ಐತಿಹಾಸಿಕ ಬಜೆಟ್. ₹ 11.11 ಲಕ್ಷ ಕೋಟಿ ಬಂಡವಾಳ ವೆಚ್ಚಕ್ಕೆ ಅವಕಾಶ ಕಲ್ಪಿಸುವ ಜೊತೆಗೆ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿ ಇರಿಸಿದೆ. </blockquote><span class="attribution">–ನರೇಂದ್ರ ಮೋದಿ, ಪ್ರಧಾನಿ</span></div>.<div><blockquote>ಕೇಂದ್ರದ ಮಧ್ಯಂತರ ಬಜೆಟ್ನಲ್ಲಿ ಹೊಣೆಗಾರಿಕೆ ಮತ್ತು ಮುನ್ನೋಟ ಎರಡೂ ಕಾಣೆಯಾಗಿವೆ! ಬಡವರು ಮತ್ತು ಮಧ್ಯಮ ವರ್ಗದವರ ನೋವನ್ನು ಕಡಿಮೆ ಮಾಡುವ ಯಾವ ಯೋಜನೆಗಳೂ ಇಲ್ಲ.</blockquote><span class="attribution">–ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>