ನವದೆಹಲಿ: ಕೇಂದ್ರ ಹಾಗೂ ರಾಜ್ಯಗಳ ಸಹಕಾರದೊಂದಿಗೆ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೊಷಿಸಿದರು.
ಇದರಲ್ಲಿ ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಘೋಷಿಸಿದರು. ಇದರಿಂದ ನಗರಾಭಿವೃದ್ಧಿಗೆ ಅಗತ್ಯವಿರುವ ಡಿಜಿಟಲೀಕರಣ ಮತ್ತು ಭೂ ದಾಖಲೆಗಳಿಗೆ ಭೂ ಆಧಾರ್ ಅಳವಡಿಕೆಗೆ ಒತ್ತು ನೀಡಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಜಮೀನುಗಳಿಗೆ ಯುಎಲ್–ಪಿನ್ ಯೋಜನೆಗೆ ಆಧಾರ್ ಜೋಡಣೆ, ಸರ್ವೆ ಸಬ್ ಡಿವಿಷನ್, ಲ್ಯಾಂಡ್ ರಿಜಿಸ್ಟ್ರಿ ಮತ್ತು ಫಾರ್ಮ್ ರಿಜಿಸ್ಟ್ರಿಯನ್ನು ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ಸಾಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ.