ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್ ಅಕ್ರಮ; ತನಿಖಾ ವರದಿ ಬಗ್ಗೆ ಸಂಪುಟ ಸಭೆಯ ಬಳಿಕ ನಿರ್ಧಾರ: CM ಸಿದ್ದರಾಮಯ್ಯ

Published : 3 ಸೆಪ್ಟೆಂಬರ್ 2024, 5:56 IST
Last Updated : 3 ಸೆಪ್ಟೆಂಬರ್ 2024, 5:56 IST
ಫಾಲೋ ಮಾಡಿ
Comments

ಮೈಸೂರು: ಕೋವಿಡ್ ಅವಧಿಯಲ್ಲಿನ ಅಕ್ರಮಗಳ ಕುರಿತು ತನಿಖಾ ಆಯೋಗವು ನೀಡಿರುವ ವರದಿಯನ್ನು ಗುರುವಾರ ಸಂಪುಟ ಸಭೆಯ ಮುಂದೆ ಇಡಲಾಗುವುದು. ನಂತರವಷ್ಟೇ ಕ್ರಮದ ಕುರಿತು ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ' ತನಿಖೆಯ ವರದಿಯನ್ನು ನಾನೇ ಇನ್ನೂ ನೋಡಿಲ್ಲ. ವಿರೋಧ ಪಕ್ಷಗಳಿಗೆ ವರದಿ ಕೊಟ್ಟವರು ಯಾರು? ವರದಿ ನೋಡದೆಯೇ ಅವರು ಮಾತನಾಡುವುದು ಸರಿಯೇ' ಎಂದು ಪ್ರಶ್ನಿಸಿದರು.

ಸುಧಾಕರ್ ಗೆ ಮಾನಸಿಕವಾಗಿ ತಾನೇನು ತಪ್ಪು ಮಾಡಿದ್ದೇನೆ ಎಂಬ ಅರಿವಿದೆ. ಹೀಗಾಗಿ ಅವರು ವರದಿ ಬಹಿರಂಗಕ್ಕೆ ಮುಂಚೆಯೇ ಟೀಕೆ ಮಾಡುತ್ತಿದ್ದಾರೆ. ಕುಂಬಳಕಾಯಿ‌ ಕಳ್ಳ ಎಂದರೆ ಅವರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಏಕೆ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT