ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತಮ್ಮ ಪಕ್ಷದವರಿಗೇ ಒಂದು, ಬಿಜೆಪಿಗೇ ಇನ್ನೊಂದು ನ್ಯಾಯ ಎಂಬ ನೀತಿಯನ್ನು ಕಾಂಗ್ರೆಸ್ ಅನುಸರಿಸಿದೆ. ಶಾಸಕ ಚೆನ್ನಾರೆಡ್ಡಿ ಮೇಲೆ ಅಟ್ರಾಸಿಟಿ ಪ್ರಕರಣವಿದ್ದರೂ ಅವರನ್ನು ಬಂಧಿಸಲು ಸೂಚಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಮನೆಯಲ್ಲಿ ಬಿರಿಯಾನಿ ಊಟ ಹಾಕಿಸಿದ್ದಾರೆ. ಆರೋಪಗಳಿದ್ದರೂ ಸಚಿವ ಎನ್.ಚಲುವರಾಯಸ್ವಾಮಿಯವರನ್ನು ಬಂಧಿಸಿಲ್ಲ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಬಂದ ತಕ್ಷಣವೇ ಬಿ. ನಾಗೇಂದ್ರ ಅವರನ್ನೂ ಬಂಧಿಸಿರಲಿಲ್ಲ’ ಎಂದರು.