ಚಾರ್ಧಾಮ್ ಮಹಾಪಂಚಾಯತ್ ಸದಸ್ಯ ಬ್ರಿಜೇಶ್ ಸಾತಿ ಮಾತನಾಡಿ, ‘ಚಾರ್ಧಾಮ್ ಯಾತ್ರೆಗೆ ಈ ಬಾರಿ ಭಕ್ತರು ಮತ್ತು ಯಾತ್ರಿಗಳಷ್ಟೇ ಬರುತ್ತಿಲ್ಲ. ಬದಲಿಗೆ ಯುಟ್ಯೂಬರ್ಸ್, ವ್ಲಾಗರ್ಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವವರೂ ಬರುತ್ತಿದ್ದಾರೆ. ಅವರಿಗೆ ದೇವರ ದರ್ಶನಕ್ಕಿಂತಲೂ ಮನರಂಜನೆ ಹಾಗೂ ಹಿಮಾಲಯದ ತಪ್ಪಲಿನ ದೇವಾಲಯಗಳ ಆಸಕ್ತಿದಾಯಕ ವಿಡಿಯೊಗಳನ್ನು ಚಿತ್ರೀಕರಣ ಮಾಡುವುದು ಮುಖ್ಯ ಉದ್ದೇಶವಾಗಿದೆ’ ಎಂದರು.