ಮುಂಬೈ: ಲೋಕಸಭೆಯಲ್ಲಿ ರಾಹುಲ್ ಗಾಂಧಿಯ ಚೊಚ್ಚಲ ಭಾಷಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಕುರಿತು ಎದ್ದಿರುವ ವಿವಾದದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ವಿರೋಧ ಪಕ್ಷದ ನಾಯಕನ ಬೆನ್ನಿಗೆ ನಿಂತಿದ್ದಾರೆ.
'ಭಾಷಣದಲ್ಲಿ ಹಿಂದುತ್ವದ ವಿರುದ್ಧ ಒಂದು ಪದವನ್ನೂ ರಾಹುಲ್ ಮಾತನಾಡಿಲ್ಲ’ ಎಂದು ಠಾಕ್ರೆ ಹೇಳಿದ್ದಾರೆ.
‘ನಾನು ರಾಹುಲ್ ಗಾಂಧಿ ಅವರ ಭಾಷಣವನ್ನು ಆಲಿಸಿದ್ದೇನೆ. ನಾವು ಯಾರೂ ಹಿಂದುತ್ವವನ್ನು ಅವಮಾನಿಸಿಲ್ಲ ಹಾಗೂ ಅದನ್ನು ಸಹಿಸುವುದೂ ಇಲ್ಲ. ರಾಹುಲ್ ಗಾಂಧಿ ಅವರು ಬಿಜೆಪಿ ಎಂಬುದು ಹಿಂದುತ್ವ ಅಲ್ಲ ಎಂದಿದ್ದಾರೆ. ನಾವು ಬಿಜೆಪಿಯ ಸಂಗವನ್ನು ತೊರೆದಿದ್ದೇವೆ. ಬಿಜೆಪಿ ಎಂದರೆ ಮಾತ್ರ ಹಿಂದುತ್ವವಲ್ಲ’ ಎಂದಿದ್ದಾರೆ.