ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಹಾಯ ಮಾಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ, ಮುಂದಿನ ನಡೆ ಏನಿರಬೇಕು ಎಂದು ತೀರ್ಮಾನಿಸಲು
ಸಮಯಾವಕಾಶ ನೀಡಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸರ್ವಪಕ್ಷದಲ್ಲಿ ಭಾಗವಹಿಸಿದರು.
ಹಸೀನಾ ಅವರು ಸೋಮವಾರ ಸಂಜೆ ಭಾರತಕ್ಕೆ ಬಂದಿದ್ದಾರೆ. ಸಂಸತ್ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, 'ಬಾಂಗ್ಲಾದೇಶದ ಸೇನಾ ಮುಖ್ಯಸ್ಥರ ಜೊತೆ ಕೇಂದ್ರ ಸರ್ಕಾರ ಮಾತನಾಡಿದೆ, ಆ ದೇಶದಲ್ಲಿ ಇರುವ ಅವರಿಗೆ ಭದ್ರತೆಯನ್ನು ಖಾತರಿಪಡಿಸುವಂತೆ ಹೇಳಲಾಗಿದೆ' ಎಂಬ ಮಾಹಿತಿಯ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕಾಣಿಸಿಕೊಂಡಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಸರ್ಕಾರಕ್ಕೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಜೈಶಂಕರ್, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಶಾಂತಿಯ ಹಿಂದೆ ವಿದೇಶಿ ಸರ್ಕಾರಗಳ ಕೈವಾಡವಿರಲಿಲ್ಲ. ಅಲ್ಲಿನ ಪರಿಸ್ಥಿತಿ ತೀರಾ ಅನಿಶ್ಚಿತವಾಗಿದೆ, ಪರಿಸ್ಥಿತಿಯ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಗೊತ್ತಾಗಿದೆ.
ಅಲ್ಲಿ ಬಿಕ್ಕಟ್ಟು ವಿದೇಶಿ ಸರ್ಕಾರಗಳು, ಮುಖ್ಯವಾಗಿ ಪಾಕಿಸ್ತಾನದ, ಪಾತ್ರ ಇದ್ದಿರಬಹುದೇ ಎಂಬ ಪ್ರಶ್ನೆಯನ್ನು ರಾಹುಲ್ ಅವರು ಸಭೆಯಲ್ಲಿ ಕೇಳಿದ್ದರು. ಜೊತೆಗೆ, ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಸಮುದಾಯದವರ ಬಗ್ಗೆ ರಾಹುಲ್ ಕಳವಳ ವ್ಯಕ್ತಪಡಿಸಿದ್ದರು.
ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮನೆಗಳು ಮತ್ತು ಆಸ್ತಿಗಳನ್ನು ಪ್ರತಿಭಟನಕಾರರು ಗುರಿಯಾಗಿಸಿಕೊಂಡಿದ್ದಾರೆ ಎಂದು ಜೈಶಂಕರ್ ವಿವರಿಸಿದ್ದಾರೆ.
ಹಸೀನಾ ಅವರು ಭಾರತಕ್ಕೆ ಬಂದು 24 ಗಂಟೆಗಳ ಕಾಲ ಕಳೆದಿಲ್ಲ. ಅವರು ಆಘಾತಕ್ಕೆ ಒಳಗಾಗಿದ್ದಾರೆ. ಅವರಿಗೆ ಚೇತರಿಸಿಕೊಳ್ಳಲು ಸರ್ಕಾರ ಸಮಯ ನೀಡಿದೆ. ಅದಾದ ನಂತರ, ಅವರ ಮುಂದಿನ ಸಲಹೆ ಸೇರಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಬಾಂಗ್ಲಾ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವುದಾಗಿ ರಾಹುಲ್ ಸೇರಿದಂತೆ ಹಲವು ನಾಯಕರು ಭರವಸೆ ನೀಡಿದ್ದಾರೆ. 'ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳ ಬಗ್ಗೆ ಸರ್ವಪಕ್ಷ ಸಭೆಗೆ ಮಾಹಿತಿ ನೀಡಿದ್ದೇನೆ. ಅಲ್ಲಿ ದೊರೆತ ಒಕ್ಕೊರಲ ಬೆಂಬಲವನ್ನು ಮೆಚ್ಚುತ್ತೇನೆ' ಎಂದು ಜೈಶಂಕರ್ ಅವರು 'ಎಕ್ಸ್' ಮೂಲಕ ಪ್ರಕಟಿಸಿದರು.
ರಾಷ್ಟ್ರದ ಭದ್ರತೆ ಹಾಗೂ ಹಿತಾಸಕ್ತಿಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಜೊತೆ ಇರಲಿದೆ.– ಕಾರ್ತಿ ಚಿದಂಬರಂ, ಕಾಂಗ್ರೆಸ್ ನಾಯಕ
ಪ್ರಜಾತಂತ್ರಕ್ಕೆ ಅಪಾಯ ಎದುರಾದಾಗ, ಅಧಿಕಾರಸ್ಥರು ಸರ್ವಾಧಿಕಾರಿಗಳಾದಾಗ, ದೇಶದ ಜನ ಕೆಲವು ಕಾಲ ಸಹಿಸುತ್ತಾರೆ. ನಂತರ ಅರಾಜಕತೆ ಉಂಟಾಗುತ್ತದೆ.ಸಂಜಯ್ ರಾವುತ್, ಶಿವಸೇನಾ (ಯುಬಿಟಿ) ನಾಯಕ
ಪ್ರಜಾತಂತ್ರ ಕೊನೆಗೊಳಿಸಿ, ಸರ್ವಾಧಿಕಾರವನ್ನು ತರಲು ಯತ್ನಿಸುವ ದೇಶಗಳಲ್ಲಿ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತದೆವೀರೇಂದ್ರ ಸಿಂಗ್, ಎಸ್ಪಿ ನಾಯಕ
ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಬೆಳವಣಿಗೆ ಮೇಲೆ ಕಣ್ಣಿಟ್ಟಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ದೇಶ ಸಮರ್ಥವಾಗಿದೆಲಹರ್ ಸಿಂಗ್ ಸಿರೋಯಾ ಬಿಜೆಪಿ ಸಂಸದ
lಬಾಂಗ್ಲಾದೇಶಕ್ಕೆ ಪ್ರಯಾಣ ಕೈಗೊಳ್ಳದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ
lರಾಜಧಾನಿ ಢಾಕಾದಲ್ಲಿನ ಬಹುತೇಕ ಸರ್ಕಾರಿ ಕಚೇರಿಗ ಳಲ್ಲಿ ನೌಕರರ ಹಾಜರಾತಿ ಕಡಿಮೆ ಇತ್ತು.
lಪ್ರತಿಯೊಬ್ಬ ಪೊಲೀಸನ ಸುರಕ್ಷತೆಯನ್ನು ಖಾತ್ರಿಪಡಿಸುವವರೆಗೆ ಮುಷ್ಕರ ನಡೆಸಲಾಗುವುದು ಎಂದು ಬಾಂಗ್ಲಾದೇಶ ಪೊಲೀಸ್ ಅಸೋಸಿಯೇಶನ್ (ಬಿಪಿಎ) ಹೇಳಿದೆ
l ಬಾಂಗ್ಲಾದೇಶದಲ್ಲಿ ಅತಂತ್ರರಾಗಿರುವ ಮಹಾ ರಾಷ್ಟ್ರದ 20 ವಿದ್ಯಾರ್ಥಿಗಳನ್ನು ತ್ವರಿತವಾಗಿ ಕರೆತರಲು ವಿಶೇಷ ತಂಡ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ
lಅಸ್ಸಾಂ ಗಡಿಯಲ್ಲಿ ಕಟ್ಟೆಚ್ಚರ
lಕೋಲ್ಕತ್ತದಿಂದ ತಾಯ್ನಾಡಿಗೆ ತೆರಳುತ್ತಿದ್ದ 45 ಬಾಂಗ್ಲಾದೇಶಿ ಪ್ರಜೆಗಳು ಪ್ರಯಾಣ ಮೊಟಕುಗೊಳಿಸಿ, ಭಾರತ ಗಡಿಯ ಪೆತ್ರಾಪೋಲ್ ತಾಣದಲ್ಲಿಯೇ ಉಳಿಯಬೇಕಾಯಿತು.
lಏರ್ ಇಂಡಿಯಾ ಮಂಗಳವಾರ ಸಂಜೆ ಯಿಂದಲೇ ದೆಹಲಿಯಿಂದ ಢಾಕಾಕ್ಕೆ ತನ್ನ ನಿಗದಿತ ವಿಮಾನಯಾನವನ್ನು ಪುನ ರಾರಂಭಿಸಿತು. ವಿಸ್ತಾರಾ ಕೂಡ ತನ್ನ ನಿಗದಿತ ವಿಮಾನ ಸೇವೆಗಳನ್ನು ಆಗಸ್ಟ್ 7 ರಿಂದ ಪುನರಾ ರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.