ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ: ತುಂಗಭದ್ರೆಯಲ್ಲಿ ಮತ್ತೆ ಗರಿಗೆದರಿದ ಮೀನುಗಾರಿಕೆ

Published : 14 ಸೆಪ್ಟೆಂಬರ್ 2024, 6:11 IST
Last Updated : 14 ಸೆಪ್ಟೆಂಬರ್ 2024, 6:11 IST
ಫಾಲೋ ಮಾಡಿ
Comments
ಮುಂಡರಗಿ ಪಟ್ಟಣದ ಜಾಗೃತ್ ವೃತ್ತದ ಮಾರುಕಟ್ಟೆಯಲ್ಲಿ ಮೀನು ಮಾರಾಟದಲ್ಲಿ ತೊಡಗಿರುವ ವ್ಯಾಪಾರಿಗಳು
ಮುಂಡರಗಿ ಪಟ್ಟಣದ ಜಾಗೃತ್ ವೃತ್ತದ ಮಾರುಕಟ್ಟೆಯಲ್ಲಿ ಮೀನು ಮಾರಾಟದಲ್ಲಿ ತೊಡಗಿರುವ ವ್ಯಾಪಾರಿಗಳು
ಸದ್ಯ ನದಿಯಲ್ಲಿ ಸಾಕಷ್ಟು ನೀರಿದ್ದು ಮೀನುಗಾರಿಕೆಗೆ ತುಂಬಾ ಅನುಕೂಲವಾಗಿದೆ. ಡಿಸೆಂಬರ್ ತಿಂಗಳವರೆಗೂ ಇದೇ ರೀತಿ ನೀರು ತಟಸ್ಥವಾಗಿ ನಿಂತರೆ ಮೀನುಗಾರ ಕುಟುಂಬಗಳು ನಾಲ್ಕು ಕಾಸು ಮಾಡಿಕೊಳ್ಳುತ್ತವೆ
ಮಹೇಶ ಕಿಳ್ಳಿಕ್ಯಾತರ ಕೊರ್ಲಹಳ್ಳಿ ಗ್ರಾಮದ ಮೀನುಗಾರ
ಮಧ್ಯವರ್ತಿಗಳಿಗೆ ಮಾತ್ರ ಲಾಭ
ತುಂಗಭದ್ರಾ ನದಿಯಲ್ಲಿ ಜಿಲೇಬಿ ಹವಳಮಟ್ಟು ಮುರುಕೋಡು ಕಾಗಿ ಬಾಳಿ ಮೊದಲಾದ ತಳಿಯ ಮೀನುಗಳು ದೊರೆಯುತ್ತವೆ. ಒಂದೊಂದು ತಳಿಯ ಮೀನಿಗೆ ಒಂದೊಂದು ದರ ನಿಗದಿಯಾಗಿರುತ್ತದೆ. ಆದರೆ ಇಲ್ಲಿಯ ಮೀನುಗಾರರು ಸಾಮಾನ್ಯವಾಗಿ ಒಂದು ಕೆ.ಜಿ ಮೀನನ್ನು ₹ 50-60ಕ್ಕೆ ಮಾರಾಟ ಮಾಡುತ್ತಾರೆ. ಪ್ರತಿಯೊಬ್ಬ ಮೀನುಗಾರರು ನಿತ್ಯ ₹ 400- ₹ 500 ಆದಾಯ ಪಡೆದುಕೊಂಡು ಮಧ್ಯಾಹ್ನ ಬೇರೆ ಕೆಲಸಕ್ಕೆ ತೆರಳುತ್ತಾರೆ. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮೀನುಗಳ ತಳಿ ಗಾತ್ರ ಆಕಾರ ಮೊದಲಾದವುಗಳಿಗೆ ಅನುಗುಣವಾಗಿ ₹ 100- ₹200ಕ್ಕೆ ಕೆಜಿಯಂತೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಎಲ್ಲ ಮಾರುಕಟ್ಟೆಗಳಲ್ಲಿ ಇರುವಂತೆ ಇಲ್ಲಿಯೂ ಮೀನುಗಾರರಿಗಿಂತ ಮಧ್ಯವರ್ತಿಗಳೇ ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ.
ನೀರು ತಟಸ್ಥವಾಗಿರಬೇಕು
ನದಿಯಲ್ಲಿ ನೀರು ರಭಸವಾಗಿ ಹರಿದರೆ ಮೀನುಗಾರರಿಗೆ ಸಾಕಷ್ಟು ಮೀನುಗಳು ದೊರೆಯುವುದಿಲ್ಲ. ನೀರು ತಟಸ್ಥವಾಗಿ ನಿಂತರೆ ಭರಪೂರ ಮೀನುಗಳು ದೊರೆಯುತ್ತವೆ. ಹೀಗಾಗಿ ಮೀನುಗಾರರು ನದಿಯಲ್ಲಿ ನೀರು ತಟಸ್ಥವಾಗಿ ನಿಲ್ಲಬೇಕೆಂದು ಬಯಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT