ಜನರಿಗೆ ಆಮಶಂಕೆ ಬಾಧಿಸಿರುವುದು ಪರೀಕ್ಷೆಯ ವರದಿಯಿಂದ ದೃಢಪಟ್ಟಿದೆ. ಕೆಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದೂ ವಿವರಿಸಿದರು.
ಮಣ್ಣುಮಿಶ್ರಿತ ನೀರು ಕುಡಿದಿರುವುದರಿಂದ ವಾಂತಿ–ಭೇದಿ ಶುರುವಾಗಿದೆ ಎಂದು ಜನರು ತಿಳಿಸಿದ್ದಾರೆ. ಕಲುಷಿತ ನೀರು ಕುಡಿದ ಕಾರಣ ಇದು ಹರಡಿದೆ ಎನ್ನುವುದು ದೃಢಪಟ್ಟಿಲ್ಲ. ಕಲುಷಿತ ನೀರು ಕುಡಿದು ರೋಗ ಬಂದಿದ್ದರೆ, ಇನ್ನಷ್ಟು ಜನರಲ್ಲಿ ಕಾಣಿಸಿಕೊಳ್ಳಬೇಕಿತ್ತು. ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದಿದ್ದಾರೆ.