ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿರುವ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆಗೆ ಹೆಲಿಕಾಪ್ಟರ್ ಮೂಲಕ ಭಾರತೀಯ ವಾಯಪಡೆಯು (ಐಎಎಫ್) ಇಂದು (ಶುಕ್ರವಾರ) ಕಾರ್ಯಾಚರಣೆ ಆರಂಭಿಸಿದೆ.
ಅಮೆರಿಕ ಹಾಗೂ ಬ್ರಿಟನ್ನ ಚಾರಣಿಗರ ರಕ್ಷಣೆಗೆ ಬೆಳಿಗ್ಗೆ 8ಕ್ಕೆ ಹುಡುಕಾಟ ಪ್ರಾರಂಭಿಸಲಾಯಿತು ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ) ತಿಳಿಸಿದೆ.
ಚೌಖಂಬದಲ್ಲಿ ಸುಮಾರು 6,500 ಮೀಟರ್ ಎತ್ತರದಲ್ಲಿ ಲಾಜಿಸ್ಟಿಕಲ್ ಮತ್ತು ತಾಂತ್ರಿಕ ಉಪಕರಣಗಳು ಕೆಳಗೆ ಬಿದ್ದ ಕಾರಣ ಪರ್ವತಾರೋಹಿಗಳು ಅಪಾಯಕ್ಕೆ ಸಿಲುಕಿದ್ದಾರೆ ಎಂದು ಎಸ್ಇಒಸಿ ತಿಳಿಸಿದೆ.
ಈ ಕುರಿತು ಮಾಹಿತಿ ದೊರೆತ ಕೂಡಲೇ ಚಮೋಲಿ ಜಿಲ್ಲಾಧಿಕಾರಿ, ಚಾರಣಿಗರ ರಕ್ಷಣೆಗಾಗಿ ಭಾರತೀಯ ರಕ್ಷಣಾ ಸಚಿವಾಲಯದ ಮಿಲಿಟರಿ ವ್ಯವಹಾರಗಳ ಇಲಾಖೆಗೆ (ಡಿಎಂಎ) ಮನವಿ ಮಾಡಿದ್ದರು.